‘ದೇವಗೌಡರ ನೆರಳಲ್ಲಿ ಬದುಕಿ ಕಾಂಗ್ರೆಸ್ ಲೀಡರ್ ಆಗ್ತಾರೆ’ ಸಿದ್ದುಗೆ ಟಾಂಗ್ ಕೊಟ್ಟ ಮಾಧುಸ್ವಾಮಿ

ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಹೇಳಿಕೆ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಸಂಪೂರ್ಣ ದೇವೆಗೌಡರ ಹಂಗಲ್ಲಿ ನೆರಳಲ್ಲಿ ಬದುಕಿದವರು ನಳೀನ ಕುಮಾರ ಬಗ್ಗೆ ಏನ್ ಮಾತ್ನಾಡ್ತಾರೆ. ದೇವಗೌಡರ ನೆರಳಲ್ಲಿ ಬದುಕಿ ಕಾಂಗ್ರೆಸ್ ಲೀಡರ್ ಆಗ್ತಾರೆ. ಎಲ್ಲಿದ್ದರೂ ಸಿದ್ದರಾಮಯ್ಯ ಯಾರ ಗರಡಿಯಲ್ಲಿ ಇದ್ದರು ನಮ್ಮನ್ನು ಟೀಕೆ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ ಸಚಿವ ಮಾಧುಸ್ವಾಮಿ.

ಅವರ ಯೋಗ್ಯತೆಗೆ ಅವರನ್ನು ಪಕ್ಷದ ನಾಯಕರನ್ನಾಗು ಮಾಡಿಲ್ಲ. ವಿರೋಧ ಪಕ್ಷದ ನಾಯಕರನ್ನು ಕೇಳುತ್ತಿದ್ದೇವೆ. ಒಂದು ತಿಂಗಳಿಂದ ಕೇಳುತ್ತಿದ್ದೇವೆ. ಒಬ್ಬರ ಹೆಸರನ್ನು ಕೊಡುವುದಕ್ಕೆ ಆಗುತ್ತಿಲ್ಲ. ಅವರು ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ. ಮೊದಲು ಸಿದ್ದರಾಮಯ್ಯ ನಮ್ಮ ನಾಯಕರೆಂದು ಡಿಕೆಶಿ, ಪರಮೇಶ್ವರ, ಪಾಟೀಲ್ ಅವರಿಂದ ಹೇಳಿಸಿ.

ನಾವು ಯಡಿಯೂರಪ್ಪ ಅವರು ನಮ್ಮ ನಾಯಕರೆಂದು ತೀರ್ಮಾನ ಮಾಡಿದ್ದೇವೆ. ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ. ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ. ಸಿದ್ದರಾಮಯ್ಯ ಟೀಕೆ ಮಾಡುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights