ದಸರಾ ಹಬ್ಬಕ್ಕೆ ನಗರದ ಎಲ್ಲಾ ಎಟಿಎಂಗಳು ಖಾಲಿ ಖಾಲಿ….

ಯಾದಗಿರಿ ಜನಕ್ಕೆ ದಸರಾ ಹಬ್ಬದ ಖುಷಿ ಇಲ್ಲವಾಗಿದೆ. ನಗರದ ಎಲ್ಲ ಎಟಿಎಂಗಳು ಖಾಲಿ ಖಾಲಿಯಾಗಿದ್ದು, ಹಣ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ.

ಹಬ್ಬದ ದಿನವೇ ಎಟಿಎಂಗಳು ಖಾಲಿಯಾಗಿದ್ದು, ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಹಣವಿಲ್ಲದೇ ಜನರು ಪರದಾಡುವಂತಾಗಿದೆ. ಹಣವಿಲ್ಲದೆ ವ್ಯಾಪಾರ, ವಹಿವಾಟು ಮಂದಗತಿಯಲ್ಲಿ ಸಾಗಿದೆ. ಬ್ಯಾಂಕ್ ಗಳಿಗೆ ಜನ ಹಿಡಿಶಾಪ ಹಾಕತೊಡಗಿದ್ದಾರೆ.

ಅನೇಕ ಎಟಿಎಂ ಬಾಗಿಲು ಹಾಕಿವೆ. ಬಾಗಿಲು ಓಪನ್ ಆಗಿರುವ ಎಟಿಎಂಗಳಲ್ಲಿ ನೋ ಕ್ಯಾಶ್ ಫಲಕ ಹಾಕಿದ್ದು, ಹಣವಿಲ್ಲದ ಕಾರಣ ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೆ ಜನ ಪರದಾಡುವಂತಾಗಿದೆ ಎಂದು ಹೇಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights