ದಸರಾ ಗಜಪಡೆಗೆ ಇಂದು ವಿದಾಯ : ನಾಡಿನಿಂದ ಕಾಡಿಗೆ ತೆರಳು ಹಿಂದೇಟು ಹಾಕಿದ ಹೆಣ್ಣಾನೆ
ದಸರಾ ಗಜಪಡೆಗೆ ಇಂದು ವಿದಾಯ ಹಿನ್ನೆಲೆ ಹೆಣ್ಣಾನೆ ನಾಡಿನಿಂದ ಕಾಡಿಗೆ ತೆರಳು ಹಿಂದೇಟು ಹಾಕುತ್ತಿದೆ. ಲಾರಿ ಏರದೆ ಹಠ ಮಾಡಿತ್ತಿರುವ ಲಕ್ಷೀ ಹೆಣ್ಣಾನೆಯನ್ನು ಲಾರಿ ಏರಿಸಲು ಮಾವುತ ಕಾವಾಡಿಗಳು ಹರಸಾಹಸ ಪಡುತ್ತಿದ್ದಾರೆ.
ಸತತ ಒಂದು ಗಂಟೆಯಿಂದ ಲಾರಿ ಏರಲು ನಕಾರ ಮಾಡುತ್ತಿರುವ ಆನೆ ಲಾರಿ ಬಳಿ ಹೋಗುತ್ತಿದ್ದಂತೆ ವಾಪಸ್ ಓಡಿ ಬರುತ್ತಿದೆ. ಎಷ್ಟೇ ಪ್ರಯತ್ನಿಸಿದರು ಲಕ್ಷೀ ಲಾರಿ ಏರಲು ನಕಾರ ಮಾಡುತ್ತಿದೆ. ಗಂಡಾನೆ ಗೋಪಿ ಸಹಾಯದಿಂದ ಲಾರಿಗೆ ಹತ್ತಿಸುವ ಪ್ರಯತ್ನವು ವಿಫಲವಾಗಿದೆ.
ಮೂರ್ನಾಲ್ಕು ಬಾರಿ ಲಾರಿ ಬಳಿ ಗೋಪಿ ಎಳೆದುಕೊಂಡು ಹೋದಲು ವಾಪಸ್ ಓಡಿ ಬಂದ ಲಕ್ಷೀ ಆನೆಯನ್ನು ನೋಡಲು ನೂರಾರು ಜನ ಜಮಾವಣೆಯಾಗಿದ್ದಾರೆ. ಜನರು ಲಕ್ಷೀ ಪುಂಡಾಟವನ್ನ ಕುತೂಹಲದಿಂದ ವಿಕ್ಷಿಸುತ್ತಿದ್ದಾರೆ.
ಅರ್ಜುನ, ಗೋಪಿ, ವಿಕ್ರಮ ಆನೆಗಳ ಮೂಲಕ ಪ್ರಯತ್ನ ಮಾಡಿದರೂ ನಾ ಹೋಗಲ್ಲ ಹೋಗಲ್ಲ ಅಂತ ಹಠ ಹಿಡಿದೆ ಲಕ್ಷ್ಮಿ ಆನೆ. ಮಾವುತ ಲಾರಿ ಏರಿಸಲು ಹರ ಸಾಹಸ ಪಡುತ್ತಿದ್ದಾನೆ.