ತೆಪ್ಪ ಮುಳುಗಿದರೂ ಬದುಕಿಳಿದ ಅದೃಷ್ಟವಂತರು : ಬಡ ಜೀವ ಉಳಿಸಲು ತಮ್ಮ ಜೀವ ಮುಡಿಪಾಗಿಟ್ಟಿದ್ದರು

ಬದುಕಿದಿಯಾ ಬಡ ಜೀವ ಎಂಬಂತೆ ಮೂರು ಜನ ನದಿಯಲ್ಲಿ ತೆಪ್ಪ ಮುಳುಗಿ, ಕೊಚ್ಚಿ ಹೋಗುವಾಗ ಗ್ರಾಮಸ್ಥರ ಸಹಾಯದಿಂದ ಕೊನೆಗೂ ಹರಸಾಹಸ ಪಟ್ಟು ಬದುಕಿಬಂದಿದ್ದಾರೆ.

ಹೌದು ಈ ರೀತಿಯ ಭಯಾನಕ ಘಟನೆಗೆ ಸಾಕ್ಷಿಯಾಗಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾ ತಾಲೂಕಿನ ಕೆಂಚನಗುಡ್ಡ ತುಂಗಭದ್ರಾ ನದಿ. ಹೌದು ಗುತ್ತಿಗೆ ಪಶುವೈದ್ಯ ಮಲ್ಲಿಕಾರ್ಜುನ ಎಂಬುವವರು ನದಿಯನ್ನು ದಾಟಿ ಅಲ್ಲಿ ಇರುವ ಹಸುಗಳಿಗೆ ಲಸಿಕೆ ನೀಡಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ.

ನದಿ ದಾಟಿ ಲಸಿಕೆ ಹಾಕಿ ಮೂರು ಜನ ಇನೇನು ದಡ ಸೇರಬೇಕು ಎನ್ನುವಾಗ ತೆಪ್ಪ ಕಲ್ಲಿಗೆ ತಾಗಿ ಮುಗಚಿ ಬಿದ್ದಿದೆ. ಬಳಿಕೆ ತಪ್ಪ ಮುಳುಗಿದ ಹಿನ್ನೆಲೆ ಮೂರು ಜನ ನದಿಯಲ್ಲಿ ತೇಲಿ ತುಸು ದೂರ ಸಾಗಿದ್ದಾರೆ. ಬಳಿಕ ದಡದಲ್ಲಿ ಇದ್ದವರು ಹಗ್ಗ ಕೊಟ್ಟು ಮುಳುಗುತ್ತಿದ್ದ ಆ ಮೂವರನ್ನು ರಕ್ಷಣೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights