ತಡರಾತ್ರಿ ಸುರಿದ ಮಳೆ ಹಿನ್ನೆಲೆ : ಈರುಳ್ಳಿ ಬೆಳೆದ ರೈತ ಕಂಗಾಲು

ತಡರಾತ್ರಿ ಸುರಿದ ಮಳೆ ಹಿನ್ನೆಲೆ 5 ಎಕರೆ ಈರುಳ್ಳಿ ಬೆಳೆ ನೀರುಪಾಲಾಗಿ  ಈರುಳ್ಳಿ ಬೆಳೆದ ರೈತ ಕಂಗಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ತಾಂಡಾದಲ್ಲಿ ನಡೆದಿದೆ.

ಶಂಕ್ರಪ್ಪ ಲಮಾಣಿ ಎಂಬಾತ ರೈತನ 5 ಎಕರೆ ಈರುಳ್ಳಿ ನೀರು ಪಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಮೀನಿನ ತುಂಬೆಲ್ಲಾ ಮಳೆಯ ನೀರು ತುಂಬಿ ಮಳೆ ನೀರಲ್ಲಿ ಕೊಚ್ಚಿ ಹೋದ ಬಂಗಾರದಂತೆ ಈರುಳ್ಳಿ ಬೆಳೆ ಕೊಚ್ಚಿಹೋಗಿದೆ.

ನೀರಲ್ಲಿರೋ ಈರುಳ್ಳಿ ಬೆಳೆ ಬದುವಿಗೆ ತಂದು ಹಾಕಿದರೂ ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ ಎಂದು ಮಹಿಳೆ ಶೇಖವ್ವ ಲಮಾಣಿ ಅಳಲು ತೋಡಿಕೊಂಡಿದ್ದಾರೆ.

ಸಾಲಮಾಡಿ ಬೆಳೆ ಹಾಕಿದ್ವೀ ಈಗ ರಾತ್ರಿ ಮಳೆಗೆ ಈರುಳ್ಳಿ ಬೆಳೆ ನೀರು ಪಾಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲ ಭಾರೀ ಮಳೆಗೆ ಹಲವು ರೈತರ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳು ಮಾತ್ರ ತಮ್ಮ ಕಡೆ ತಲೆ ಹಾಕಿ ನೋಡಿಲ್ಲ, ಹೀಗಾಗಿ ಈರುಳ್ಳಿ ಬೆಳೆ ಮಳೆಹಾನಿಗೆ ಪರಿಹಾರ ಕೊಡುವಂತೆ ರೈತರ ಆಗ್ರಹಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights