ಜೆಡಿಎಸ್ ಗೆ ಕಮರಿದ ಮಂಡ್ಯ ಮನ್ಮುಲ್ ಅಧಿಕಾರದ ಕನಸು..?
ಮಂಡ್ಯ ಮನ್ಮುಲ್ ಅಧಿಕಾರದ ಕನಸು ಜೆಡಿಎಸ್ ಗೆ ಕಮರಿ ಹೋದಂತೆ ಕಾಣುತ್ತಿದೆ.
ಮನ್ಮುಲ್ ನ ಜೆಡಿಎಸ್ ನಿರ್ದೇಶಕ ಬಿಜೆಪಿ ಸೇರ್ಪಡೆಗೆ ಸಿದ್ದರಾಗಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಬೆಂಬಲಿತ ಮನ್ಮುಲ್ ನಿರ್ದೇಶಕನಾಗಿರೋ ಎಸ್ಪಿ ಸ್ವಾಮಿ ಸಿ.ಎಂ.ಯಡಿಯೂರಪ್ಪ ರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಕಚೇರಿ ಕಾರ್ಯಾಲಯದಲ್ಲಿ ಬಿಜೆಪಿ ಸೇರ್ಪಡೆಗೆ ಸಿದ್ದತೆ ನಡೆಸಿದ್ದಾರೆ ಎನ್ನುವ ಮಾಹಿತಿ ಆಪ್ತ ಮೂಲಗಳಿಂದ ಲಭ್ಯವಾಗಿದೆ.
ಮನ್ಮುಲ್ ಚುನಾವಣೆಯಲ್ಲಿ ೮ ಸ್ಥಾನ ಗೆದ್ರು ಜೆಡಿಎಸ್ ಗೆ ಅಧಿಕಾರ ಕೈ ತಪ್ಪುತ್ತದೆ. ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಭಂಟನಾಗಿದ್ದ ಸ್ವಾಮಿ ಬಿಜೆಪಿ ಸೇರ್ಪಡೆ ಯಿಂದ ಜೆಡಿಎಸ್ ಪಕ್ಷದಲ್ಲಿ ಆತಂಕ ಶುರುವಾಗಿದೆ.