ಜೆಡಿಎಸ್ ಗೆ ಕಮರಿದ ಮಂಡ್ಯ ಮನ್ಮುಲ್ ಅಧಿಕಾರದ ಕನಸು..?

ಮಂಡ್ಯ ಮನ್ಮುಲ್ ಅಧಿಕಾರದ ಕನಸು ಜೆಡಿಎಸ್ ಗೆ ಕಮರಿ ಹೋದಂತೆ ಕಾಣುತ್ತಿದೆ.

ಮನ್ಮುಲ್ ನ ಜೆಡಿಎಸ್ ನಿರ್ದೇಶಕ  ಬಿಜೆಪಿ ಸೇರ್ಪಡೆಗೆ ಸಿದ್ದರಾಗಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಬೆಂಬಲಿತ ಮನ್ಮುಲ್ ನಿರ್ದೇಶಕನಾಗಿರೋ ಎಸ್ಪಿ ಸ್ವಾಮಿ ಸಿ.ಎಂ‌.ಯಡಿಯೂರಪ್ಪ ರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಕಚೇರಿ ಕಾರ್ಯಾಲಯದಲ್ಲಿ ಬಿಜೆಪಿ ಸೇರ್ಪಡೆಗೆ ಸಿದ್ದತೆ ನಡೆಸಿದ್ದಾರೆ ಎನ್ನುವ ಮಾಹಿತಿ  ಆಪ್ತ ಮೂಲಗಳಿಂದ ಲಭ್ಯವಾಗಿದೆ.

ಮನ್ಮುಲ್ ಚುನಾವಣೆಯಲ್ಲಿ ೮ ಸ್ಥಾನ ಗೆದ್ರು ಜೆಡಿಎಸ್ ಗೆ ಅಧಿಕಾರ ಕೈ ತಪ್ಪುತ್ತದೆ. ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ‌ ಭಂಟನಾಗಿದ್ದ ಸ್ವಾಮಿ ಬಿಜೆಪಿ ಸೇರ್ಪಡೆ ಯಿಂದ ಜೆಡಿಎಸ್ ಪಕ್ಷದಲ್ಲಿ ಆತಂಕ ಶುರುವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights