ಜೀವ ಕಾಪಾಡೋ 108 ಸಿಬ್ಬಂದಿಗಳಿಗೆ ಪ್ರತಿನಿತ್ಯ ನರಕಯಾತನೆ….
ಜೀವ ಕಾಪಾಡೋ 108 ಸಿಬ್ಬಂದಿಗಳಿಗೆ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕೊಪ್ಪಳ ಜಿಲ್ಲೆಯ 108 ವಾಹನಗಳ ಜಿಲ್ಲಾ ಸಂಯೋಜಕನ ದರ್ಪದಿಂದಾಗಿ ಜೀವ ಕಾಪಾಡುವ ಸಿಬ್ಬಂದಿಗಳಿಗೆ ಬೆಲೆನೇ ಇಲ್ಲದಂತಾಗಿದೆ.
ವಾಹನ ರಿಪೇರಿ ಸೇರಿದಂತೆ ವಾಹನದ ಟೈರ್ ಚೇಂಜ್ ಮಾಡ್ಸಿ ಅಂದು ಧಮ್ಕಿ ಹಾಕಲಾಗುತ್ತಿದೆ. 108 ವಾಹನಗಳ ಜಿಲ್ಲಾ ಸಂಯೋಜಕ ರಾಘವೇಂದ್ರನಿಂದ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ರಜೆ ಕೇಳಿದ್ರೆ ಅವಾಚ್ಯ ಶಬ್ದದಿಂದ ನಿಂದನೆ , ಪ್ರತ್ಯುತ್ತರ ಕೊಟ್ರೆ ಕೆಲಸದಿಂದ ಗೇಟ್ ಪಾಸ್ ಕೊಡೋದಾಗಿ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ಪ್ರತಿನಿತ್ಯ ಸಿಬ್ಬಂದಿಗಳು ನೋವು ಅನುಭವಿಸ್ತಾ ಇದ್ದಾರೆ.
ನೊಂದ 108 ಸಿಬ್ಬಂದಿಗಳಿಂದ ರಾಘವೇಂದ್ರನ ದೌರ್ಜನ್ಯದ ಅವಾಚ್ಯ ಶಬ್ದದಿಂದ ನಿಂದಿಸಿರೋ ಆಡಿಯೋ ವೈರಲ್ ಆಗಿದೆ.