ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊಂಡ ಹಾವು : ಕೆರೆ ಹಾವನ್ನ ಕಂಡು ಗಾಬರಿಗೊಂಡ ಸಿಬ್ಬಂದಿ
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆರೆ ಹಾವೊಂದು ಕಾಣಿಸಿಕೊಂಡು ಸಿಬ್ಬಂದಿಗಳು ಗಾಬರಿಗೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
2ನೇ ಶನಿವಾರ ರಜೆ ಇದ್ರು ಕೆಲಸ ನಿರ್ವಹಿಸುತ್ತಿದ್ದ ಕೆಲ ಸಿಬ್ಬಂದಿಗಳ ಕಣ್ಣಿ ಕಚೇರಿಯ ರೆಕಾರ್ಡ್ ರೂಂ ನಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಗಾಬರಿಗೊಂಡ ಸಿಬ್ಬಂದಿಗಳು ಕಚೇರಿಯಿಂದ ಹೊರಬಂದಿದ್ದಾರೆ. ನಂತರ ಉರಗತಜ್ಞ ಸ್ನೇಕ್ ನರೇಶ್ ಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಸ್ನೇಕ್ ನರೇಶ್ ಕೆರೆ ಹಾವನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.