ಜಿಪಂ ಅಧ್ಯಕ್ಷೆ ಸರ್ಕಾರಿ ಕಾರು ಮೇಲೆ ಓಡಾಡಿದ ಜೋಡು ನವಿಲುಗಳು….

ಜಿಪಂ ಅಧ್ಯಕ್ಷೆ ಸರ್ಕಾರಿ ಕಾರು ಮೇಲೆ ಜೋಡು ನವಿಲುಗಳು ಓಡಾಡಿದ ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದ ಬಳಿಯ ತೋಟದಲ್ಲಿ ನಡೆದಿದೆ.

ದಸರಾ ಸಂದರ್ಭದಲ್ಲಿ ವಾಹನದ ಮೇಲೆ ನವಿಲು ಓಡಾಟ ಶುಭ ಸಂಕೇತ ಅನ್ನೋ ಚರ್ಚೆ ನಡೆಯುತ್ತಿದೆ. ಅಕ್ಟೋಬರ್ 5ರಂದು ಹಿರೇಮಾಗಿಯಲ್ಲಿ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಬಾಯಕ್ಕ ಮೇಟಿ, ಬಾಗಲಕೋಟೆ ಜಿಪಂ ಅಧ್ಯಕ್ಷೆರು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬರುವಾಗ ದಾರಿ ಮಧ್ಯೆ ತಮ್ಮ ತೋಟದಲ್ಲಿ ವಾಹನ ನಿಲ್ಲಿಸಿದಾಗ ಜೋಡು ನವಿಲುಗಳ ಓಡಾಟ ಮಾಡಿವೆ.

ಬೆಂಬಲಿಗರು ವಾಹನದ ಮೇಲೆ ಜೋಡು ನವಿಲುಗಳ ಓಡಾಟ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುವ ವಾಹನದ ಮೇಲೆ ಕಾಗೆ ಕುಳಿತಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಬಾಗಲಕೋಟೆ ಜಿಪಂ ಅಧ್ಯಕ್ಷೆ ಸರ್ಕಾರಿ ವಾಹನದ ಮೇಲೆ ಜೋಡು ನವಿಲುಗಳ ಓಡಾಟ ಶುಭ ಸಂಕೇತ ಅನ್ನೋ ಚರ್ಚೆ ಮಾಡಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights