ಕೋಟಿಗೊಬ್ಬ 3 ಚಿತ್ರತಂಡಕ್ಕೆ ಎದುರಾಗಿದ್ದ ಸಂಕಷ್ಟ ನಿವಾರಣೆ : ಬಾಲಚಂದ್ರ, ಪ್ರಸನ್ನ ಬಿಡುಗಡೆ
ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರತಂಡಕ್ಕೆ ಎದುರಾಗಿದ್ದ ಸಂಕಷ್ಟ ಸದ್ಯ ನಿವಾರಣೆಯಾಗಿದೆ.
ಮುಂಬೈ ಏಜೆಂಟ್ ಇರಿಸಿಕೊಂಡಿದ್ದ ಬಾಲಚಂದ್ರ ಹಾಗು ಪ್ರಸನ್ನ ಬಿಡುಗಡೆಯಾಗಿದ್ದು, ಬಾಲಚಂದ್ರ ಪ್ರಸನ್ನ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬಾಲಚಂದ್ರ ಅಕೌಂಟೆಂಟ್, .ಪ್ರಸನ್ನ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಇಬ್ಬರನ್ನೂ ಮುಂಬೈ ಏಜೆಂಟ್ ನೊಬ್ಬ ಒತ್ತೆಯಾಳಾಗಿ ಇರಿಸಿಕೊಂಡಿದ್ರು ಅಂತ ಹೇಳಲಾಗಿತ್ತು.
ಒತ್ತೆಯಾಳುಗಳು ಒಟ್ಟು 95 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಚಿತ್ರೀಕರಣ ಮುಗಿಸಿದ ದಿನ 50 ಲಕ್ಷ ಕೊಡಿವಂತೆ ಬೇಡಿಕೆ ಇಟ್ಟಿದ್ದರು. ಹೆಚ್ಚು ಹಣ ಕೊಡಲು ನಿರಾಕರಿಸಿದ್ದಕ್ಕೆ ಚಿತ್ರತಂಡ ಇದ್ದ ಹೋಟೆಲ್ ಬಳಿ ಬಂದಿದ್ದ ಏಜೆನ್ಸಿ, ನಂತ್ರ ಅಲ್ಲಿಂದಲೇ ಕ್ಯಾಷಿಯರ್ ಹಾಗೂ ಸಹ ನಿರ್ದೇಶಕನನ್ನು ಕರೆದುಕೊಂಡು ಹೋಗಿದ್ದರು. ತದನಂತ್ರ ಅನೇಕ ಬಾರೀ ನಿರ್ಮಾಪಕರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಇದ್ರಿಂದ ನಿನ್ನೆ ಸುರಪ್ಪಬಾಬು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಪೊಲ್ಯಾಂಡ್ ಪೊಲೀಸರಿಗೆ ಮಾಹಿತಿ ಗೊತ್ತಾಗಿದ್ದೆ ಮುಂಬೈ ಏಜೆಂಟ್ ಭಯಭೀತರಾಗಿ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ.