ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಢ….!

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಢ ಸಂಭವಿಸಿದೆ.  ರಾಶಿ ಮಾಡಲು ಹೊಲಕ್ಕೆ ತೆರಳಿದ್ದ ವೇಳೆ ಹರಿದು ಬಿದ್ದ ವಿದ್ಯುತ್ ವೈರ್ ನೋಡದ ತಂದೆ ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ್ದಾರೆ.

ಕುಷ್ಟಗಿ ತಾಲುಕಿನ ಚಳಗೇರಿ ಗ್ರಾಮದಲ್ಲಿ ಈ ದುರಂತ ಸಾವು ಸಂಭವಿಸಿದೆ. ತಂದೆ ಹನುಮಪ್ಪ ಬೀರಪ್ಪನವರ (30) ಮಕ್ಕಳಾದ ಪ್ರಿಯಾಂಕ(4), ಬೀರಪ್ಪ(2) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಚಳಗೇರಿಯ ಹೊರವಲಯದಲ್ಲಿರುವ ಹೊಲಯದಲ್ಲಿ ಟ್ರಾಕ್ಟರ್ ಮೂಲಕ ರಾಶಿ ಮಾಡಲು ಹೊಲಕ್ಕೆ ತೆರಳಿದಾಗ ಟ್ರಾಕ್ಟರ್ ಮೇಲೆ ಹರಿದು ಬಿದ್ದ ವಿದ್ಯುತ್ ತಂತಿ ಬಿದ್ದಿದೆ. ಈ ವೇಳೆ ನೋಡದೆ ಹನುಮಪ್ಪನಿಗೆ ಮತ್ತು ಮಕ್ಕಳಿಗೆ ವಿದ್ಯತ್ ತಂತಿ ತಾಗಿ ಸಾವನ್ನಪ್ಪಿದ್ದಾರೆ.

ಕುಷ್ಟಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights