ಕೆಳಸೇತುವೆಯ ನಿಂತ ನೀರಿನಲ್ಲಿ ಸಿಲುಕಿದ ಸಾರಿಗೆ ಬಸ್…..

ಕೆಳಸೇತುವೆಯಲ್ಲಿ ನಿಂತ ನೀರಿನಲ್ಲಿ ಸಾರಿಗೆ ಸಂಸ್ಥೆ ಬಸ್ ವೊಂದು ಸಿಲುಕಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ನಡೆದಿದೆ.

ರಾತ್ರಿವೇಳೆ ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ವಸತಿ ಬ,ಸ್ ಕೂಡಗಿ ಎನ್ ಟಿ ಪಿ ಸಿ ರೈಲ್ವೆ ಕೆಳ ಸೇತುವೆಯಲ್ಲಿ ನಿಂತ ಸುಮಾರು 4 ಅಡಿ ನೀರಿನಲ್ಲಿ ಮುಂದೆ ಸಾಗದೆ ನಿಂತುಕೊಂಡ ಪರಿಣಾಮ ಮಸೂತಿ ಗ್ರಾಮದ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.

ಚಾಲಕ, ನಿರ್ವಾಹಕ ಮದ್ಯರಾತ್ರಿಯಲ್ಲಿ  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ ಪರದಾಡಿದರೂ ಪ್ರಯೋಜನವಾಗಿಲ್ಲ. ಪ್ರಯಾಣಿಕರು ಪರ್ಯಾಯ ವಾಹನ ಹುಡುಕಿಕೊಂಡು ಸ್ವಗ್ರಾಮ ಸೇರಿದ್ದಾರೆ.

ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದರೆ ಸಂಗ್ರಹ ಅಗುವ ನೀರಿನಲ್ಲಿ ವಾಹನಗಳು ಮುಂದಿ ಸಾಗದೇ ನಿಂತುಕೊಂಡು ಬಿಡುತ್ತವೆ. ಇದರಿಂದ ತರೆ ವಾಹನಗಳು, ಬೈಕ್ ಸವಾರರು ಸಹ ಪರದಾಡುವಂತ ಸ್ಥಿತಿ ಪ್ರತಿಬಾರಿ ಇಲ್ಲಿ ಸಂಭವಿಸುತ್ತದೆ. ಹೀಗಾಗಿ ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರ, ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights