ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಸಿದ್ದು ಚೇಲಾ, ಬಕೆಟ್, ಅಯೋಗ್ಯ ಅಧ್ಯಕ್ಷ…!

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಸಿದ್ದು ಚೇಲಾ, ಬಕೆಟ್, ಅಯೋಗ್ಯ ಅಧ್ಯಕ್ಷ ಎಂದು ಅನರ್ಹ ಶಾಸಕರ ಎಸ್.ಟಿ ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

ಪಕ್ಷ ದ್ರೋಹ ಕೆಲಸ ಮಾಡಿದ್ದಾರೆನ್ನುವ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಂಡ ಕಾರಿದ ಸೋಮಶೇಖರ್, ಕಾಂಗ್ರೆಸ್ ನ ಕೆಲ ಆಂತರಿಕ ಪ್ಲಾನ್ ಗಳನ್ನ ಹೊರಹಾಕಿದ್ದಾರೆ. ಪರಮೇಶ್ವರ್, ಜಾರ್ಜ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ನಾಲ್ಕೇ ಜನರದ್ದೇ ಕಾಂಗ್ರೆಸ್ ಸರ್ಕಾರನಾ..? ದಿನೇಶ್ ನನ್ನ ಜೊತೆಯಲ್ಲಿ ಸದಸ್ಯನಾಗಿದ್ದವನು.

ಯಾರನ್ನ ಸೋಲಿಸಬೇಕು ಅನ್ನೋದು ಅನ್ಕೊಂಡಿದ್ದರು ಅದರ ಬಗ್ಗೆ ನಮಗೆ ಮಾಹಿತಿ ಇದೆ. ರೇವಣ್ಣ ಮಗ ಗೆಲ್ಲಲು ಏನ್ ಮಾಡಿದರು, ಕುಮಾರಸ್ವಾಮಿ ಸೋಲಿಸಲು ಏನ್ ಮಾಡಿದ್ರು ಅನ್ನೋ ವಿಚಾರ ಗೊತ್ತಿದೆ. ಕಾಂಗ್ರೆಸ್ ಅವರು ಇದನ್ನೆಲ್ಲಾ ಮಾಡಿದ್ದಾರೆ ಅನ್ನೋದು ಗೊತ್ತಾಗಬಾರದು ಅನ್ನೋ ಪ್ಲಾನ್ ಮಾಡಿದ್ದಾರೆ.

ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸಿದೆ ಅನ್ನೋ ವಿಚಾರ ಮಾಜಿ ಸಿಎಂ ಕುಮಾರಸ್ವಾಮಿಗೆ ಹಾಗೂ ರೇವಣ್ಣಗೆ ಗೊತ್ತಾಗಬಾರದು ಅನ್ನೋ ವಿಚಾರವನ್ನ ಸ್ಕೆಚ್ ಹಾಕಿದ್ದಾರೆ ದಿನೇಶ್ ಗುಂಡೂರಾವ್. ಕೆ.ಹೆಚ್ ಮುನಿಯಪ್ಪ ಅವರನ್ನು ಸೋಲಿಸಿದ್ರು. ದಿನೇಶ್ ಗುಂಡೂರಾವ್, ಜಾರ್ಜ್ ಇಂತಹ ಸಾಕಷ್ಟು ಪ್ಲಾನ್ ಮಾಡಿದ್ರು. ಸಿದ್ದುಗೆ ಗೊತ್ತಾಗದೇ ಹುಲ್ಲು ಕಡ್ಡಿಯನ್ನ ಅಲ್ಲುಗಾಡಿಸಲ್ಲಾ ಇವರೆಲ್ಲಾ. ಇವರು ಮಾತನಾಡಿದ ಆಡಿಯೋ ನಮ್ಮ ಬಳಿ ಇದೆ. ಕೋರ್ಟ್ ತೀರ್ಪಿನ ಬಳಿಕೆ ನಾವು ಇದೆಲ್ಲದನ್ನ ಸವಿಸ್ತಾರವಾಗಿ ಮಾತನಾಡುತ್ತೇವೆ ಎಂದು ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights