ಕೆಎಚ್ ಮುನಿಯಪ್ಪರನ್ನು ಸೋಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದೆ – ಶ್ರೀನಿವಾಸಗೌಡ
ಕೆಎಚ್ ಮುನಿಯಪ್ಪರಿಗೆ ಹದ್ದಾಗಿ ಕುಕ್ಕಿದ್ಯಾರು ಎಂಬ ಎಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಕೋಲಾರದ ಜಿಲ್ಲಾಧಿಕಾರಿ ಕಛೇರಿ ಬಳಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪರನ್ನು ಸೋಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದೆ. ಎಲ್ಲಾ ರೀತಿಯಲ್ಲಿ ಕೆಎಚ್ ಮುನಿಯಪ್ಪರನ್ನು ಸೋಲಿಸಲು ಶ್ರಮ ವಹಿಸಿದ್ದೆ. ಅದರಲ್ಲಿ ಮುಚ್ಚುಮರೆ ಇಲ್ಲ. ನನ್ನನ್ನು ಸೋಲಿಸಲು ಮುನಿಯಪ್ಪ ಶ್ರಮಿಸಿದ್ದರು ಹಾಗಾಗಿ ನಾನೂ ಈ ಕೆಲಸ ಮಾಡಿದೆ. ಅವರಿಗೂ ಸೋಲಿನ ರುಚಿ ಗೊತ್ತಾಗಬೇಕು ಅದಕ್ಕಾಗಿ ಮಾಡಿದೆ. ಹಳ್ಳಿ ತಿರುಗಿ ಮುನಿಯಪ್ಪ ವಿರುದ್ದ ಶ್ರಮಿಸಿದ್ದೇನೆ. ಎಲ್ಲಿಬೇಕಾದ್ರೂ ಹೇಳ್ತೇನೆ ನನಗೆ ಭಯ ಇಲ್ಲ ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪರನ್ನು ಹದ್ದಾಗಿ ಕುಕ್ಕಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.