ಕುಮಾರಸ್ವಾಮಿ ವಿರುದ್ದ ಮತ್ತೆ ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಳಿ….

ಕುಮಾರಸ್ವಾಮಿ ಸಿ.ಎಂ ಆಗಿದ್ದಾಗಿಂತಲೂ ಸಿದ್ದರಾಮಯ್ಯ ಸರ್ಕಾರದಲ್ಲಿ ನಮ್ಮ‌ ಕ್ಷೇತ್ರಕ್ಕೆ ಅಭಿವೃದ್ದಿ ಕೆಲಸಗಳಾಗಿವೆ‌ ಎಂದು ಕುಮಾರಸ್ವಾಮಿ ವಿರುದ್ದ ಮತ್ತೆ ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿದ ನಾರಾಯಣಗೌಡ, ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಇತ್ತು ಆ ಸರ್ಕಾರಕ್ಕೆ ನಾನೇನು ಕೈ ಎತ್ತಿ ಓಟು ಹಾಕಿರಲಿಲ್ಲ. ಆದ್ರೂ ಅವರು ನಮ್ಮ‌ ಕ್ಷೇತ್ರಕ್ಕೆ ನಾಲ್ಕು ಮುರಾರ್ಜಿ ಶಾಲೆ, ಒಂದು ಕಿತ್ತೂರು ರಾಣಿ ಚೆನ್ನಮ್ಮ ಒಂದು ನವೋದಯ ಶಾಲೆಯನ್ನ ಮಂಜೂರು ಮಾಡಿದ್ರು. ಆದ್ರೆ ನಾನು ಕೈ ಎತ್ತಿ ಓಟು ಹಾಕೊ ಸರ್ಕಾರದಲ್ಲಿದ್ರು ಆ ಶಾಲೆಗಳ ಕಾಂಪೌಂಡ್ ಹಾಕಿಸಲು ಆಗಲಿಲ್ಲ.

ಯಾಕಂದ್ರೆ ಈ ತಾಲೂಕಿನ ನಾಲ್ಕೈದು ಕಿಡಿಗೇಡಿಗಳು ಪುಣ್ಯಾತ್ಮರು ದೇವೇಗೌಡರ, ಕುಮಾರಸ್ವಾಮಿ, ರೇವಣ್ಣ ಅವರ ಕಿವಿ ಊದುವುದನ್ನ ಬಿಟ್ರೆ ಇನ್ನೇನು ಮಾಡಲಿಲ್ಲ.‌ ಪುಣ್ಯಾತ್ಮ ಕೃಷ್ಣಪ್ಪ ಅವರು 30 ವರ್ಷ ಹೇಗಿದ್ರೊ ಗೊತ್ತಿಲ್ಲ. ನಾನು ಆರುವರೆ ವರ್ಷ ಇರೋಕೆ ಬಾರೀ ಕಷ್ಟ ಆಯ್ತು. ನಾನು ನನ್ನ ತಾಲೂಕಿಗೆ 700 ಕೋಟಿ ರೂ ಯೋಜನೆ ಸಿದ್ದಪಡಿಸಿಕೊಂಡಿದ್ದೆ.

ಇದಕ್ಕಾಗಿ ಹದಿಮೂರು ತಿಂಗಳು ತಿರುಗಿ ತಿರುಗಿ ನನಗೆ ಸಾಕಾಗಿ ಹೋಯ್ತು. ಏನಾದ್ರು ಮನೆಗೆ ಹೋದ್ರೆ ನನ್ನ ಚಪ್ಪಲಿ ಬಿಡೊ ಜಾಗದಲ್ಲಿ‌ ನಿಲ್ಲಿಸ್ತಿದ್ರು. ಎರಡನೇ ಬಾರಿಗೆ ನಮ್ಮದೇ ಸರ್ಕಾರ ಇದೆ ಈಗಲೂ ಅಭಿವೃದ್ದಿ ಮಾಡ್ಲಿಲ್ಲ ಅಂದ್ರೆ ಜನರಿಗೆ ನಾನು ಏನು ಹೇಳಬೇಕು. ಅದುಕ್ಕೋಷ್ಕರ ಕ್ಷೇತ್ರದ ಅಭಿವೃದ್ದಿಗಾಗಿ ನಾನು ರಾಜೀನಾಮೆ ಕೊಟ್ಟಿದ್ದೀನಿ.

ಅದೃಷ್ಟವೋ ಏನೋ ತಾಲೂಕಿನ ಯಡಿಯೂರಪ್ಪ ಸಿ ಎಂ ಆದ್ರು. ಆಗ ನಾನು ಅವರ ಬಳಿ ಹೋದೆ ಅವರ ಬಳಿ 700 ಕೋಟಿ ರೂ ಅನುದಾನದ ಬಗೆಗೆ ಕೇಳ್ದೆ. ಅದಕ್ಕೆ ಅವರು ನಾರಾಯಣಗೌಡ ಆ ಕ್ಷೇತ್ರದಲ್ಲಿ ನಮ್ಮ ಶಾಸಕರಿರಲಿಲ್ಲ ಆದ್ರು ಆಗ 700 ಕೋಟಿ ರೂ ಅನುದಾನ ಕೊಟ್ಟಿದ್ದೀನಿ. ಅದ್ರ ಜೊತೆಗೆ ನಮ್ಮ ತಂದೆಯ ಹೆಸರಿನಲ್ಲಿ ಇನ್ನೂ 300 ಕೋಟಿ ಒಟ್ಟು 1 ಸಾವಿರ ಕೋಟಿ‌ರೂ ಕೊಡ್ತಿನಿ ಬಾ. ನೀನು ಏನೇ ಕೆಲ್ಸ ಇದ್ರೂ ಮಾಡಿಕೊಡ್ತಿನಿ ಅಂತ ಆಶೀರ್ವಾದ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights