ಕಾಡುಪ್ರಾಣಿಗಳ ಮನಮೋಹಕ ದೃಶ್ಯಕಾವ್ಯ : ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು
ಕಾಫಿನಾಡು ಒಂದು ಜಿಲ್ಲೆ ಆದರೆ ಇದು ಹಲವು ಜಗತ್ತಿಗೆ ಸಾಕ್ಷಿಯಾಗಿದೆ. ಕಣ್ಣು ಹಾಯಿಸದಲ್ಲೆಲ್ಲಾ ಹಿಂಡಿಂಡು ಕಾಡು ಪ್ರಾಣಿಗಳು, ಸ್ವಚ್ಛಂದವಾಗಿ ಆಹಾರ ಸೇವಿಸ್ತಿರೋ ಈ ಕಾಡುಪ್ರಾಣಿಗಳನ್ನ ನೋಡಿದ್ರೆ ಮನಸ್ಸಿಗೇನೋ ಆನಂದ.
ಹೌದು… ಇಂಥಹದ್ದೊಂದು ಮನಮೋಹಕ ದೃಶ್ಯಕಾವ್ಯ ಕಂಡಿದ್ದು ಚಿಕ್ಕಮಗಳೂರು ಮೂಡಿಗೆರೆಯ ಬಿದಿರುತಳದಲ್ಲಿ. ಮೀಸಲು ಅರಣ್ಯದಂಚಿನ ಗ್ರಾಮ ಇದು. ಸತೀಶ್ ಎಂಬುವವರು ಸ್ನೇಹಿತರ ಜೊತೆ ತೋಟಕ್ಕೆ ಹೋದಾಗ ಹಿಂಡು-ಹಿಂಡು ಕಾಡು ಪ್ರಾಣಿಗಳು ಕಾಣಿಸಿಕೊಂಡಿವೆ. ಸ್ವಚ್ಛಂದವಾಗಿ ಆಹಾರ ಸೇವಿಸ್ತಿರೋ ಕಾಡುಪ್ರಾಣಿಗಳನ್ನು ಸತೀಶ್ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದಾರೆ.
ಆನೆ, ಕಾಡೆಮ್ಮ, ಕಡವೆ ಹಾಗೂ ನರಿಗಳ ಗುಂಪು ದರ್ಶನವಾಗಿದೆ. ಅಲ್ಲದೇ ಜನರನ್ನ ನೋಡಿ ಕಾಲಲ್ಲೇ ಮರಿ ರಕ್ಷಣೆ ಮಾಡಿದ ಆನೆಯೂ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇಂಥಹ ಮನಮೋಹಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.