ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶಕ್ಕೆ ಸೀರೆ ಆಫರ್ : ರೊಚ್ಚಿಗೆದ್ದ ಮಹಿಳಾಮಣಿಗಳು

ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶಕ್ಕೆ ಸೀರೆ ಆಫರ್ ಒಡ್ಡಿ ಮಹಿಳೆಯರನ್ನು ಕರೆತಂದ ಆಯೋಜಕರಿಗೆ ಚೀಮಾರಿ ಹಾಕಿದ ಘಟನೆ ಹೊಸಕೋಟೆ ನಗರದ ಹಳೇ ಬಸ್ ನಿಲ್ದಾಣದ ಬಳಿ ನಡೆದಿದೆ.

ಹೌದು… ಇಂದು ನಡೆದ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶಕ್ಕೆ  ಸ್ಥಳೀಯ ಹೊಸಕೋಟೆ ಕೈ ನಾಯಕರು ಸೀರೆ ಕೊಡುತ್ತೇವೆಂದು ಮಹಿಳೆಯರನ್ನು ಕರೆಸಿದ್ದಾರೆ. ಸಮಾವೇಶ ಮುಗಿಯುತ್ತಿದ್ದಂತೆ ಆಯೋಜಕರು ಎಸ್ಕೇಪ್ ಆಗಿದ್ದಾರೆ. ಸಮಾವೇಶ ಮುಗಿಯುತ್ತಿದ್ದಂತೆ ರೊಚ್ಚಿಗೆದ್ದ ಮಹಿಳಾಮಣಿಯರು ಸೀರೆ ಕೊಡಲಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಮಹಿಳೆಯರು ತಮ್ಮ  ಅಳಲು ತೋಡಿಕೊಂಡ ಈ ವಿಡಿಯೋ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights