ಕಳ್ಳಸ್ವಾಮಿಯನ್ನ ಬಂಧಿಸುವಂತೆ ಆಗ್ರಹಿಸಿ ನಿತ್ಯಾನಂದನ ವಿರುದ್ಧ ರಾಮನಗರದಲ್ಲಿ ಪ್ರತಿಭಟನೆ..!
ಪ್ರತೀಬಾರಿ ಒಂದಿಲ್ಲೊಂದು ಅತ್ಯಾಚಾರದ ಆರೋಪಗಳನ್ನು ಮಾಡಲಾಗುವ ನಿತ್ಯನಂದಸ್ವಾಮಿಯ ವಿರುದ್ಧ ಜನ ಸಿಡಿದೆದ್ದಿದ್ದಾರೆ.
ಹೌದು.. ನಿತ್ಯಾನಂದ ನ ವಿರುದ್ಧ ರಾಮನಗರದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.
ಈ ಕೂಡಲೇ ಕಳ್ಳಸ್ವಾಮಿಯನ್ನ ಬಂಧಿಸಿ ಎಂದು ಆಗ್ರಹ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರಿಂದ ಹೋರಾಟ ನಡೆಸಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ನಿತ್ಯಾನಂದ ನ ಅಣಕು ಶವಯಾತ್ರೆ ಮಾಡಿ ಹೋರಾಟ ಮಾಡಲಾಗುತ್ತಿದೆ. ನಿತ್ಯಾನಂದ ನಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಕಿಡಿ ಕಾರಿದ್ದಾರೆ ಕಾರ್ಯಕರ್ತರು.