‘ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಬಿಜೆಪಿಯವರು ಮತ ಬೇಡುತ್ತಾರೆ’ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು
ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಮತ ಬೇಡುತ್ತಾರೆ ಅಂತ ತಾವು ಚುನಾವಣೆ ಪೂರ್ವದಲ್ಲೇ ಹೇಳಿದ ಮಾತನ್ನು ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮ ಭವಿಷ್ಯವನ್ನು ಪುನರಾವರ್ತಿಸಿದ್ದಾರೆ.
ಅವರು ಇಂದು ಬಿಎಸ್ ಯಡಿಯೂರಪ್ಪ ಸರಕಾರ ಪೂರ್ಣಾವಧಿ ಪೂರೈಸುವ ಬಗ್ಗೆ ಮಾಧ್ಯಮಮಿತ್ರರ ಪ್ರಶ್ನೆಗೆ ಉತ್ತರಿಸಿದ ಕೋಡಿ ಶ್ರೀಗಳು ನಾನು ಯಾರ ಬಗ್ಗೆಯೂ ಹೇಳಿಲ್ಲ ಅಂತ ಹೇಳಿದರು. ಇನ್ನು ವಿಧಾನಸಭೆ ಚುನಾವಣೆಗೂ ಮುನ್ನ ಭವಿಷ್ಯ ನುಡಿದಿದ್ದ ಕೋಡಿಹಳ್ಳಿ ಶ್ರೀಗಳು ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ 1 ವರ್ಷ 18 ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಅಂತ ಹೇಳಿದ್ದರು.
ಇದಲ್ಲದೇ ಇದೀಗ ಚುನಾವಣೆ ನಡೆದು 1 ವರ್ಷ 14 ತಿಂಗಳು ಕಳೆದಿದ್ದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನೇಲ್ಲ ಬದಲಾವಣೆಯಾಗಲಿದೆ ಅನ್ನೋಂದನ್ನು ಕಾದು ನೋಡಬೇಕಾಗಿದೆ.