ಇಷ್ಟಾರ್ಥ ಸಿದ್ಧಿಗಾಗಿ ಭೂವರಹನಾಥಸ್ವಾಮಿ ಮೊರೆ ಹೋದ ಇಬ್ಬರು ರಾಜಕೀಯ ದುರಂತ ನಾಯಕರು….
ದೋಸ್ತಿ ಸರ್ಕಾರವನ್ನು ಬೀಳಿಸಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಸರ್ಕಸ್ ಮಾಡುತ್ತಿರುವ ಓರ್ವ ನಾಯಕ, ಒಂದು ಸೋಲಿನಿಂದ ಗೆಲುವೇ ಕಾಣದೇ ಗೆಲುವಿಗಾಗಿ ಹುಡುಕಾಟ ನಡೆಸುತ್ತಿರುವ ಮತ್ತೋರ್ವ ನಾಯಕ ಇಬ್ಬರೂ ರಾಜಕೀಯ ಭವಿಷ್ಯ ಕಂಡು ಕೊಳ್ಳಲು ಇಷ್ಟಾರ್ಥ ಸಿದ್ಧಿಗಾಗಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ವರಹನಾಥಕಲ್ಲಳ್ಳಿಯ ಭೂವರಹನಾಥಸ್ವಾಮಿ ಮೊರೆ ಹೋಗಿದ್ದಾರೆ.
ಹೌದು.. ಅನರ್ಹತೆ ಹಣೆ ಪಟ್ಟಿ ಕಳಚಿಕೊಳ್ಳಲು ಮುಂದಾಗುತ್ತಿರುವ ಅನರ್ಹ ಶಾಸಕ ನಾರಾಯಣಗೌಡ, ದೋಸ್ತಿ ಸರ್ಕಾರ ಉರುಳಿದ ಬಳಿಕ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಸರ್ಕಸ್ ಮಾಡ್ತಾ ಇದ್ದಾರೆ. ಜೊತೆಗೆ ಒಂದು ಮತದ ಸೋಲಿನಿಂದ ಗೆಲುವೇ ಕಾಣದ ಮಾಜಿ ಬಿ.ರಾಚಯ್ಯ ಪುತ್ರ ಎ.ಆರ್.ಕೃಷ್ಣಮೂರ್ತಿ , ಧ್ರವನಾರಯಣ್ ಎದುರು ಸೋತ ಬಳಿಕ ಗೆಲುವೆ ಕಂಡಿಲ್ಲ. 1 ಮತದಿಂದ ಸೋತ ಬಳಿಕ 6 ಚುನಾವಣೆ ಎದುರಿಸಿದ್ರು ಗೆಲುವೇ ಇಲ್ಲ. ಹೀಗಾಗಿ ಚಾಮರಾಜನಗರದ ಸಂತೆ ಮರಳ್ಳಿ ಕ್ಷೇತ್ರದ ಮಾಜಿ ಶಾಸಕ ಎಚ್.ಆರ್. ಕೃಷ್ಣಮೂರ್ತಿ ರಾಜಕೀಯ ಕಂಟಕಗಳನ್ನು ಕಳೆಯಲು ವರಹನಾಥನ ಪ್ರಾರ್ಥನೆ ಮಾಡುತ್ತಿದ್ದಾರೆ.
ಇಂದು ಇಬ್ಬರು ರಾಜಕೀಯ ನಾಯಕರು ವರಹನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇಲ್ಲಿ ಸೀಗೆಹುಣ್ಣಿಮೆಯಂದು ಪೂಜೆ ಸಲ್ಲಿಸಿದದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ಪ್ರತೀತಿ ಹಿನ್ನಲೆಯಲ್ಲಿಂದು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ನಾಯಕರು.