ಇಂದು ಅಂಬರೀಶ್ ಮೊದಲ ಪುಣ್ಯಸ್ಮರಣೆ : ಭಾವುಕರಾದ ಸುಮಲತಾ

ಇಂದು ದಿವಂಗತ ಅಂಬರೀಶ್ ಅವರ ಮೊದಲ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಸಮಾಧಿಗೆ ಪುಷ್ಪ ಗುಚ್ಛಗಳಿಂದ ಅಲಂಕಾರ ಮಾಡಲಾಗಿತ್ತು. ಪತ್ನಿ ಸುಮಲತಾ ಅಂಬರೀಶ್​​, ಪುತ್ರ ಅಭಿಷೇಕ್​ ಅಂಬರೀಶ್​​​ ಹಾಗೂ ಕುಟುಂಬಸ್ಥರು ಅಂಬರೀಶ್ ಸಮಾಧಿಗೆ ಭೇಟಿ ನೀಡಿ, ಮೊದಲ ಪುಣ್ಯಸ್ಮರಣೆಯ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಅಂಬರೀಶ್ ಅವರಿಗೆ ಇಷ್ಟವಾದ ಖಾದ್ಯಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದ ಅಂಬಿ ಅಭಿಮಾನಿಗಳು ಸಮಾಧಿ ಬಳಿ ನಮಸ್ಕರಿಸಿ ಹೋಗುವ ದೃಶ್ಯಗಳು ಸಾಮಾನ್ಯವಾಗಿತ್ತು.

ಅಂಬಿ ಸಮಾಧಿಗೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಟ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಸುಮಲತಾ ಅಂಬರೀಶ್ ಅವರನ್ನು ನೆನೆದು ಭಾವುಕರಾದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights