ಆದಿಚುಂಚನಗಿರಿ 41ನೇ ಜಾನಪದ ಕಲಾಮೇಳ : ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ 41ನೇ ರಾಜ್ಯಮಟ್ಟದ ಶ್ರೀ ಕಾಲಭೈರೇಶ್ವರ ಸ್ವಾಮಿ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸನ್ಮಾನ್ಯ ಪ್ರೊ॥ ಟಿ ಶಿವಣ್ಣನವರು, ಶೈಕ್ಷಣಿಕ ಕ್ಷೇತ್ರ, ಸನ್ಮಾನ್ಯ ಡಾ॥ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು, ಸಾಹಿತ್ಯ ಕ್ಷೇತ್ರ, ಸನ್ಮಾನ್ಯ ಡಾ॥ ರತ್ನರಾಜುರವರು, ವೈದ್ಯಕೀಯ ಕ್ಷೇತ್ರ, ಸನ್ಮಾನ್ಯ ಶ್ರೀ ಎಸ್ ಡಿ ಈಶನ್ ರವರು, ಕ್ರೀಡಾ ಕ್ಷೇತ್ರ, ಸನ್ಮಾನ್ಯ ಶ್ರೀ ರಾಮಚಂದ್ರಣ್ಣಾ ಮ್ಹೆತ್ರೆರವರು, ಧಾರ್ಮಿಕ ಕ್ಷೇತ್ರ, ಇವರುಗಳಿಗೆ ಪೂಜ್ಯ ಮಹಾಸ್ವಾಮೀಜಿಯವರು ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಆಶೀರ್ವದಿಸಿದರು.
ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಸ್ವಾಮೀಜಿಗಳವರು, ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಆರ್ ಅಶೋಕ್ ರವರು, ಖ್ಯಾತ ಚಲನಚಿತ್ರ ನಟರಾದ ಸನ್ಮಾನ್ಯ ಶ್ರೀ ಜಗ್ಗೇಶ್ ರವರು, ಕಲಾವಿದರು ಹಾಗೂ ಗಣ್ಯರು ಉಪಸ್ಥಿತರಿದ್ದರು.