ಆಕ್ರಮ ವಿದ್ಯುತ್ ಸಂಪರ್ಕ ಪಶ್ನಿಸಿದಕ್ಕೆ ಲೈನ್ ಮ್ಯಾನ್ ಮೇಲೆ ಹಲ್ಲೆ….!
ಆಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿರುವುದನ್ನು ಪಶ್ನಿಸಿದಕ್ಕೆ ಲೈನ್ ಮ್ಯಾನ್ ಮೇಲೆ ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ನಡೆದಿದೆ.
ಲೈನ್ ಮ್ಯಾನ್ ನಾಗರಾಜ್ ಎಂಬುವನ ಮೇಲೆ ನಿಂಗಯ್ಯ ಹಾಗೂ ರಾಮನಿಂಗಯ್ಯ ಸೇರಿದಂತೆ ಇತರರಿಂದ ಹಲ್ಲೆ ನಡೆಸಲಾಗಿದೆ.
ನಿನ್ನೆ ಹೊಸಗಾವಿ ಗ್ರಾಮಕ್ಕೆ ಭೇಟಿ ನೀಡದ್ದ ಲೈನ್ ಮ್ಯಾನ್ ರಿಗೆ ಆಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ. ಇದನ್ನು ಖಂಡಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾದ ಲೈನ್ ಮ್ಯಾನ್ ಮೇಲೆ ನಿಂಗಯ್ಯ ರಾಮನಿಂಗಯ್ಯ ಮತ್ತು ಇತರರು ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.