ಅಭಿಮಾನಿಗೆ ಚಪ್ಪಲಿ ಕೊಡಿಸಿದ ಸಿ‌ಎಂ ಯಡಿಯೂರಪ್ಪ…..!

ಮಂಡ್ಯದಲ್ಲಿ ಸಿಎಂ ಯಡಿಯೂರಪ್ಪ ತಮ್ಮ  ಅಭಿಮಾನಿಗೆ ಚಪ್ಪಲಿ ಕೊಡಿಸಿದ್ದಾರೆ. ಅರೆ.. ಅಭಿಮಾನಿಗೆ ಸಿಎಂ ಚಪ್ಪಲಿ ಯಾಕೆ ಅಂತ ಯೋಚನೆ ಮಾಡ್ತಾಯಿರಬೇಕು ಅಲ್ವಾ… ಅದಕ್ಕೆ ಕಾರಣ ಇದೆ.

ಮಂಡ್ಯದ ಉಪ್ಪರಕನಹಳ್ಳಿಯ ಶಿವಕುಮಾರ್ ಆರಾಧ್ಯ ಬಿಎಸ್ವೈ ನ ಕಟ್ಟಾ ಅಭಿಮಾನಿ. ಬಿಎಸ್ವೈ ಸಿ.ಎಂ. ಆಗೋವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ಶಿವಕುಮಾರ್ ಗೆ  ಸಿ‌.ಎಂ ಚಪ್ಪಲಿ ಕೊಡಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸರ್ಕಾರ ಬಿದ್ದಾಗ ಪ್ರತಿಜ್ಞೆ ಮಾಡಿದ್ದ ಅಭಿಮಾನಿ ಶಿವಕುಮಾರ್. ಸಿ.ಎಂ‌. ಆದ ಬಳಿಕ ಮೇಲುಕೋಟೆಗೆ ಬಂದಿದ್ದಾಗ ಅಭಿಮಾನಿಯ ಪ್ರತಿಜ್ಞೆ ತಿಳಿದು ಚಪ್ಪಲಿ ಕೊಡಿಸುವ ಭರವಸೆ ನೀಡಿದ್ದ ಸಿ.ಎಂ‌. ಬಿಎಸ್ವೈ.

ಕೊಟ್ಟ ಮಾತಿನಂತೆ ಬಿಎಸ್ ವೈ ಅಭಿಮಾನಿಗೆ ಚಪ್ಪಲಿ ಕೊಡಿಸಿದ್ದಾರೆ. ಇಂದು ಬೆಂಗಳೂರಿನ ತಮ್ಮ‌ ನಿವಾಸಕ್ಕೆ ಅಭಿಮಾನಿಯನ್ನು ಕರೆಸಿಕೊಂಡು ಚಪ್ಪಲಿ ಕೊಡಿಸಿ ಉಚರಿಸಿ ಅಭಿನಂದಿಸಿದ್ದಾರೆ. ನೆಚ್ಚಿನ ನಾಯಕನಿಗೆ ಅಭಿಮಾನಿ ಮೇಲಿರುವ ಅಭಿಮಾನ ಕಂಡು ಸಂತಸಗೊಂಡಿದ್ದಾರೆ ಶಿವಕುಮಾರ್.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights