ಅನಾಮಧೇಯ ಪೋನ್ ಕಾಲ್ ನಿಂದ ಮುರಿದು ಬಿದ್ದ ಮದುವೆ….
ಅನಾಮಧೇಯ ಪೋನ್ ಕಾಲ್ ನಿಂದ ಮದುವೆ ಮುರಿದು ಬಿದ್ದ ಘಟನೆ ನೆನ್ನೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ನಡೆದಿದೆ.
ಹೆಣ್ಣಿನ ಮನೆಯವರಿಗೆ ಬಂದ ಪೋನ್ ಕಾಲ್
ನಗರದ ಎಲೆಕೇರಿ ಬಡಾವಣೆಯ ಭಾಗ್ಯಶ್ರೀ ವಧು ಹಾಗು ಎಲೀಯೂರು ಗ್ರಾಮದ ಬಸವರಾಜು ವರ. ನೆನ್ನೆ ನಡೆಯಬೇಕಿದ್ದ ಮದುವೆ ಒಂದು ಅನಾಮಧೆಯ ಫೋನ್ ಕಾಲ್ ನಿಂದ ನಿಂತು ಹೋಗಿದೆ. ಹೌದು.. ಮದುವೆ ಗಂಡಿಗೆ ಮೊದಲೇ ಮದುವೆಯಾಗಿದೆ ಮತ್ತು ಮಕ್ಕಳು ಇವೆ ಎನ್ನುವ ಸುದ್ದಿ ಹೆಣ್ಣಿನ ಮನೆಯವರಿಗೆ ಪೋನ್ ಕಾಲ್ ಮಾಡಿದ ಅನಾಮಧೆಯರು ಹೇಳಿದ್ದಾರೆ.
ಇದರಿಂದ ನೆನ್ನೆ ನಡೆಯ ಬೇಕಿದ್ದ ಮದುವೆ ನಿಂತು ಹೋಗಿದೆ. ಆರು ತಿಂಗಳ ಹಿಂದೆ ಇವರು ನಿಶ್ಚಿತಾರ್ಥ ನಡೆದಿತ್ತು. ನೆನ್ನೆ ಮದುವೆಯಾಗಬೇಕಿತ್ತು. ಫೋನ್ ಕಾಲ್ ನಿಂದ ಮದುವೆ ನಿಂತು ಹೋಗಿದೆ. ಇದನ್ನು ಸಾಬೀತು ಪಡಿಸುವಂತೆ ವರ ಪಟ್ಟು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು. ಇದರಿಂದ ಮಧ್ಯ ರಾತ್ರಿ ಯವರೆಗೆ ಠಾಣೆಯಲ್ಲಿ ಹೈಡ್ರಾಮ ನಡೆದಿದೆ.
ಅಂತಿಮವಾಗಿ ಮದುವೆಗೆ ನಿರಾಕರಿಸಿದ ಹೆಣ್ಣಿನ ಮನೆಯವರು, ಬೇರೊಬ್ಬ ವರನೊಂದಿಗೆ ವಧುವಿನೊಂದಿಗೆ ಮದುವೆಗೆ ಮುಂದಾಗಿದ್ದಾರೆ. ಎಲೆಕೇರಿ ಗ್ರಾಮದ ಆನಂದ್ ಹೆಣ್ಣಿಗೆ ಬಾಳು ನೀಡಲು ಮುಂದಾಗಿದ್ದಾರೆ.
ಆನಂದ್ ನೊಂದಿಗೆ ಭಾಗ್ಯಶ್ರೀ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ನಗರದ ಪೂರ್ವ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋನ್ ನಲ್ಲಿ ಆರೋಪ ಮಾಡಿದ ವ್ಯಕ್ತಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.