ಅತೃಪ್ತ ಶಾಸಕರಿಗೆ ಮುಂದುವರೆದ ಟೆನ್ಶನ್ : ಅರ್ಜಿ ವಿಚಾರಣೆ ಮುಂದೂಡಿಕೆ

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಇಂದು ಸುಪ್ರಿಕೋರ್ಟ್ ನೀಡಿದ್ದ ತೀರ್ಪಿನಿಂದ ಟೆನ್ಶನ್ ಇನ್ನೂ ಅಧಿಕವಾಗಿದೆ. ಅನರ್ಹರ ಅರ್ಜಿ ವಿಚಾರಣೆ ಬುಧುವಾರಕ್ಕೆ ಮುಂದೂಡಲಾಗಿದ್ದು, ಶಾಸಕರಲ್ಲಿ ಆತಂಕ ಮತ್ತಷ್ಟು ಅಧಿಕವಾಗಿದೆ. ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಸುಪ್ರಿಂಕೋರ್ಟ್ ಈ ಆದೇಶ ಹೊರಡಿಸಿದೆ.

ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮಾಡಬೇಕಿತ್ತು. ಆದರೆ ಕೋರ್ಟ್ ಇದನ್ನ ಬುಧುವಾರಕ್ಕೆ  ಮುಂದೂಡಿದೆ. ಈ ನಡುವೆ ಅನರ್ಹ ಶಾಸಕರು ಉಪಚುನಾವಣೆ ಸ್ಪರ್ಧೆಗೆ ಯಾವುದೇ ಆಕ್ಷೇಪ ಇಲ್ಲ ಎಂದು ಸುಪ್ರಿಕೋರ್ಟ್ ಗೆ ತಮ್ಮ ಅಭಿಪ್ರಾಯ ತಿಳಿಸಿದೆ ಚುನಾವಣೆ ಆಯೋಗ. ಆದರೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರಿಂ ಕೋರ್ಟ್ ಹೇಳದೇ ನಿಮ್ಮ ಅಭಿಪ್ರಾಯ ಸ್ವಪ್ರೇರಣೆಯಿಂದ ತಿಳಿಸೋ ಹಾಗಿಲ್ಲ  ಎಂದು ಹರಿಹಾಯ್ದಿದ್ದಾರೆ.

ಇದರ ಜೊತೆಗೆ ಕಾಂಗ್ರೆಸ್ ನ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಇಬ್ಬರು ನಾಯಕರಿಗೆ ತಮ್ಮ ವಾದ ಮಂಡನೆಗೆ ಸುಪ್ರಿಂಕೋರ್ಟ್ ನೋಟೀಸ್ ಕೊಟ್ಟಿದೆ.

ಒಟ್ಟಿನಲ್ಲಿ ಅನರ್ಹರಿಗೆ ಮಾತ್ರ ಇಂದಿನ ಸುಪ್ರಿಂ ಕೋರ್ಟ್ ತೀರ್ಪು ಮಾತ್ರ ನಿದ್ದೆಗೆಡಿಸಿದ್ದು ಮಾತ್ರ ಸುಳ್ಳಲ್ಲ.  ಚುನಾವಣೆ ಆಯೋಗ ತನ್ನ ಅಭಿಪ್ರಾಯವನ್ನು ತೀಳಿಸಿದ್ದು ಇನ್ನೂ ಸುಪ್ರಿಂಕೋರ್ಟ್ ಏನ್ ಹೇಳುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights