ಅಡುಗೆ ಮನೆಯಲ್ಲಿ ಮಕ್ಕಳು ಆಟವಾಡಲು ಬಂದ್ರೆ ಹುಷಾರ್! : ಬಿಸಿ ಸಾಂಬಾರ ಪಾತ್ರೆಯಲ್ಲಿ ಬಿದ್ದ ಬಾಲಕ ಸಾವು

ಪುಟ್ದ ಮಕ್ಕಳು ಅಡುಗೆ ಮನೆಯಲ್ಲಿ ಇರುವಾಗ ತಾಯಂದಿರು ಅದೆಷ್ಟು ಕಾಳಜಿಯಿಂದ ಇದ್ದರೂ ಕಡಿಮೆಯೇ. ಯಾಕಂದರೆ ಮಕ್ಕಳಿಗೆ ಅಡುಗೆ ಮನೆಯಲ್ಲಿ ಗ್ಯಾಸ್, ಬಿಸಿ ಬಿಸಿ ಆಹಾರ ಇರುವುದರ ಬಗ್ಗೆ ಅದರಿಂದಾಗುವ ತೊಂದರೆಯ ಬಗ್ಗೆ ಪರಿಜ್ಞಾನವಿರುವುದಿಲ್ಲ. ಮನೆಯಲ್ಲಿ ಕೆಲ ಪುಟ್ಟ ಮಕ್ಕಳು ಇದ್ದರಂತೂ ಮಕ್ಕಳನ್ನ ಹಿಡಿಯೋರೇ ಇರುವುದಿಲ್ಲ. ಹೀಗೆ ಮಕ್ಕಳು ಆಟವಾಡುತ್ತಿದ್ದಾಗ ಆಂಧ್ರ ಪ್ರದೇಶದಲ್ಲಿ ನಡೆದೇ ಹೋಗಿದೆ ಒಂದು ದುರ್ಘಟನೆ.  ಈ ಘಟನೆಯಲ್ಲಿ ಬಾಲಕನೊಬ್ಬ ತನ್ನ ಪ್ರಾಣ ಕೂಡ ಕಳೆದುಕೊಂಡಿದ್ದಾನೆ.

ಹೌದು… ಶಾಲೆಯಲ್ಲಿ ಬಿಸಿ ಬಿಸಿ ಸಾಂಬರ್ ಪಾತ್ರೆಗೆ ಬಿದ್ದ 6 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪನ್ಯಂನಲ್ಲಿ ನಡೆದಿದೆ.

ಪುರುಷೋತ್ತಮ್ ರೆಡ್ಡಿ ಮೃತಪಟ್ಟ ಬಾಲಕ. ಈ ಬಾಲಕ ಶ್ಯಾಮ್‍ಸುಂದರ್ ರೆಡ್ಡಿ ಹಾಗೂ ಕಲ್ಪನಾ ಮಗನಾಗಿರುವ ಪುರುಷೋತ್ತಮ್ ಪನ್ಯಂನ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದನು. ಈ ಘಟನೆಯಲ್ಲಿ ಪುರುಷೋತ್ತಮ್ ದೇಹ ಸಾಕಷ್ಟು ಸುಟ್ಟು ಹೋಗಿದ್ದು, ಚರ್ಮದ ಮೇಲೆ ಗುಳ್ಳೆಗಳು ಬಂದಿತ್ತು. ಹಾಗಾಗಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕ ಮೃತಪಟ್ಟಿದ್ದಾನೆ.

ಈ ಬಗ್ಗೆ ಪನ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights