ಅಕ್ರಮ ಅಂಗಡಿಗಳ ತೆರವು : ಕಣ್ಣೀರು ಹಾಕಿ ಮಹಿಳೆಯರ ಆಕ್ರೋಶ..!

ವಿಜಯಪುರ‌ ನಗರದಲ್ಲಿ ರಸ್ತೆಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಅಂಗಡಿ, ಗೂಡಂಗಡಿ ತೆರವು ಕಾರ್ಯ ಮಾಡಲಾಗಿದೆ.

ಹೌದು…  ವಿಜಯಪುರ ಜಿಲ್ಲಾಡಳಿತ, ಮಹಾನಗರ ಪಾಲಿಕೆ ನೇತೃತ್ವದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ, ನೆಹರು ಮಾರುಕಟ್ಟೆ ಮಧ್ಯದ ರಸ್ತೆ ಮೇಲೆ ಹಾಕಲಾಗಿದ್ದ ಅಂಗಡಿಗಳನ್ನು ತೆರವು ಕಾರ್ಯಾಚರಣೆ ಮಾಡಲಾಗಿದೆ.

ಸುಮಾರು 250‌ ಅಂಗಡಿ, ಗೂಡಂಗಡಿಗಳ ತೆರವು ಕಾರ್ಯಚರಣೆ ಮಾಡಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಕಲಂ 144 ರನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಎಎಸ್ಪಿ, ಇಬ್ಬರು ಡಿಎಸ್ಪಿ, ಆರು ಜನ ಸಿಪಿಐ, 12 ಜನ ಪಿಎಸೈ, 120 ಪೊಲೀಸ್ ಪೇದೆಗಳು, ಡಿಆರ್ ವಾಹನ ನಿಯೋಜನೆ ಮಾಡಲಾಗಿದೆ.

ತರಕಾರಿ ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳಿಂದ ಅತೀಕ್ರಮಣ ತೆರವಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ರಸ್ತೆ ಮೇಲೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೆಲವು ಮಹಿಳೆಯರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights