ಅಂಜನಾದ್ರಿ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷ : ವಿಡಿಯೋ ವೈರಲ್
ಕೊಪ್ಪಳ ಜಿಲ್ಲೆಯ ಹನುಮ ಉದಯಿಸಿದ ನಾಡು ಎಂಬ ಖ್ಯಾತಿಯ ಅಂಜನಾದ್ರಿ ಪರ್ವತದಲ್ಲಿ ಕರಡಿಯೊಂದು ಕಾಣಿಸಿಕೊಂಡಿದೆ.
ಹೌದು.. ವಾನರ ಸೇನೆಯಿಂದಲೇ ತುಂಬಿರುತ್ತಿದ್ದ ಅಂಜನಾದ್ರಿ ಬೆಟ್ಟದಲ್ಲಿ ಕಾಣಿಸಿಕೊಂಡಿರೊ ಜಾಂಭವಂತ ಕಾಣಿಸಿಕೊಂಡಿದೆ. ಆಂಜನೇಯ ದೇವಸ್ಥಾನ ಸುತ್ತಮುತ್ತ ರಾತ್ರಿ ಸಂಚರಿಸಿದ ಕರಡಿಯ ವಲನ ವಲನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳೀಯರಲ್ಲಿ, ಭಕ್ತರಲ್ಲಿ ಆತಂಕ ಹೆಚ್ಚಾಗಿದ್ದು, ಕಾಡು ಪ್ರಾಣಿಗಳ ದಾಳಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.