ವಿದ್ಯುತ್ ಅವಘಡ : ಗುಡಿಸಲು ಭಸ್ಮ, ಎತ್ತು ಸಾವು….!
ವಿದ್ಯುತ್ ಅವಘಡಕ್ಕೆ ಗುಡಿಸಲು ಭಸ್ಮವಾಗಿ, ಎತ್ತು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾದಮಲ್ಲಿ ನಡೆದಿದೆ.
ರಜಾಕಸಾಬ ನದಾಫ ಅವರಿಗೆ ಸೇರಿದ ಗುಡಿಸಲ, ಎತ್ತು ಸೇರಿದಂತೆ ಇದರಿಂದ ಸುಮಾರು ರೂ. 1.50 ಲಕ್ಷ ಹಾನಿಯಾಗಿದೆ. ಒಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದೆ. ಘಟನಾ ಸ್ಥಳಕ್ಕೆ ಬಸರಕೋಡ ಗ್ರಾಮ ಪಂಚಾಯಿತಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.