ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೇ 07 ತಿಂಗಳ ಮಗು ಸಾವು: ಫಲಿಸಲಿಲ್ಲ ಪೈಲಟ್ ಪ್ರಯತ್ನ
ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 07 ತಿಂಗಳು ಮಗು ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲಿಯೇ ಸಾವನ್ನಪ್ಪಿದೆ.
ದೆಹಲಿಯಿಂದ ಬೆಂಗಳೂರಿಗೆ ಇಂಡಿಯೋ ವಿಮಾನದಲ್ಲಿ ಮಗು ಮತ್ತು ಮಗುವಿನ ಪೋಷಕರು ಪ್ರಯಾಣಿಸುತ್ತಿದ್ದು. ವಿಮಾನ ಬೆಂಗಳೂರಿನ ಕಡೆಗೆ ಹಾರಾಟ ನಡೆಸುತ್ತಿದ್ದಾಗ, ಮಾರ್ಗಮಧ್ಯದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಪೋಷಕರು ಪೈಲಟ್ಗೆ ವಿಷಯ ತಿಳಿಸಿದ್ದಾರೆ.
ಮಗುವಿನ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಪೈಟಲ್ ವಿಮಾನವನ್ನು ಮಧ್ಯಪ್ರದೇಶ ಇಂಧೋರ್ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಿದ್ದಾರೆ. ಆದರೆ, ಮಗುವನ್ನು ಆಸ್ಪತ್ರೆಗೆ ಸಾಗಿಸುವ ಮೊದಲೇ ಮಗು ಅಸುನೀಗಿದೆ.
ನಿನ್ನೆ (ಬುಧವಾರ) ಸಂಜೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಗೋರಖ್ಪುರ ಮೂಲದ ದುರ್ಗೇಶ್ ಜೈಸ್ವಾಲ್ ಮತ್ತು ಅನು ಜೈಸ್ವಾಲ್ ದಂಪತಿಗಳ 7 ತಿಂಗಳ ಗಂಡು ಮಗುವಿಗೆ ಹೈಡ್ರೋಸೆಫಲಸ್ ಎಂಬ ಕಾಯಿಲೆ ಕಾಣಿಸಿಕೊಂಡಿತ್ತು. ಮೆದುಳಿಗೆ ಸಂಬಂಧಿಸಿದ ಆ ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಕ್ಕಾಗಿಯೇ ಅವರು ಮಗುವನ್ನು ಬೆಂಗಳೂರಿಗೆ ಕರೆತರುತ್ತಿದ್ದರು.
ಆದರೆ, ಮಗುವಿನ ಮಾರ್ಗ ಮಧ್ಯೆಯೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ನಿನ್ನೆ ಸಂಜೆ 5.55ಕ್ಕೆ ಬೆಂಗಳೂರಿಗೆ ಹೊರಟಿದ್ದ ವಿಮಾನವನ್ನು ಇಂದೋರ್ನಲ್ಲಿಯೇ ಇಳಿಸಲಾಯಿತು. ತಕ್ಷಣ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ನಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.
ಇದನ್ನೂ ಓದಿ: ಗ್ರಾಮ ಪಂ. ಚುನಾವಣೆ; 54,041 ಸ್ಥಾನಗಳ ಫಲಿತಾಂಶ ಪ್ರಕಟ; BJPಗೆ ಮೇಲುಗೈ