ಎನ್‌ಡಿಎ ಪರೀಕ್ಷೆಯಲ್ಲಿ ಮಹಿಳೆಯರಿಗೂ ಅವಕಾಶ: ಸುಪ್ರೀಂ ಕೋರ್ಟ್‌ ಮಧ್ಯಂತರ ತೀರ್ಪು

ಸೆಪ್ಟೆಂಬರ್ 5 ರಂದು ಎನ್‌ಡಿಎ (ರಾಷ್ಟ್ರೀಯ ರಕ್ಷಣಾ ಅಕಾಡೆಮಿ) ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಮಹಿಳೆಯರೂ ಕೂಡ ಬರೆಯಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪುನೀಡಿದೆ.

ನ್ಯಾಯಾಲಯದ ಈ ತೀರ್ಪು ಭಾರತದ ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ದೇಶದ ಸಶಸ್ತ್ರ ಪಡೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸೇವಾ ಅವಕಾಶಗಳ ವಿಷಯದಲ್ಲಿನ “ಮನಸ್ಥಿತಿಯ ಸಮಸ್ಯೆ”ಯನ್ನು ನ್ಯಾಯಾಲಯವು ದೂಷಿಸಿದೆ. ಜೊತೆಗೆ ಸರ್ಕಾರಕ್ಕೆ “ನೀವು ಇದನ್ನು ಉತ್ತಮವಾಗಿ ಬದಲಿಸಿ” ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಜನ; ಒಂದೇ ವರ್ಷದಲ್ಲಿ ಮೋದಿ ಜನಪ್ರಿಯತೆ 24%ಗೆ ಕುಸಿತ!

“ಇದು ಮನಸ್ಥಿತಿಯ ವಿಷಯವಾಗಿದೆ. ಸರ್ಕಾರ ಅದನ್ನು ಬದಲಾಯಿಸಬೇಕು… ಆದೇಶಗಳನ್ನು ನೀಡುವಂತೆ ನಮ್ಮನ್ನು ಒತ್ತಾಯಿಸಬೇಡಿ. ಈ ನೀತಿ ನಿರ್ಧಾರವು ಲಿಂಗ ಆಧಾರಿತವಾಗಿದೆ. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ನಾವು ಪ್ರತಿವಾದಿಗಳಿಗೆ ರಚನಾತ್ಮಕ ನೋಟವನ್ನು ನೀಡುತ್ತೇವೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.

“ಇದು ಸೇನೆಯು ತಾನಾಗಿಯೇ ಏನನ್ನಾದರೂ ಮಾಡುವಂತೆ ಮನವೊಲಿಸುವ ಪ್ರಯತ್ನವಾಗಿದೆ… ನಾವು ಆದೇಶಗಳನ್ನು ನೀಡುವುದಕ್ಕಿಂತ ಸೈನ್ಯವೆ ಸ್ವತಃ ಏನನ್ನಾದರೂ ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ” ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರ ಮಹತ್ವದ ತೀರ್ಪು ಸೇರಿದಂತೆ ಈ ವಿಷಯದ ಕುರಿತು ವಿವಿಧ ತೀರ್ಪುಗಳ ಹೊರತಾಗಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುತ್ತಿರುವುದಕ್ಕೆ ನ್ಯಾಯಮೂರ್ತಿ ಎಸ್‌ಕೆ ಕೌಲ್ ಮತ್ತು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ವಿಭಾಗೀಯ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ಬಿ.ವಿ ನಾಗರತ್ನ ಹೆಸರು..!

ಸರ್ಕಾರದ ನೇಮಕಾತಿ ನೀತಿಯು ತಾರತಮ್ಯವಲ್ಲ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಲು ಹಲವು ಮಾರ್ಗಗಳಿವೆ ಎಂದು ಒಕ್ಕೂಟ ಸರ್ಕಾರ ವಾದಿಸಿತ್ತು.

NDA ಯಿಂದ ಅರ್ಹ ಮಹಿಳಾ ಅಭ್ಯರ್ಥಿಗಳನ್ನು ವರ್ಗೀಕರಿಸುವುದು ಅಸಂವಿಧಾನಿಕ ಮತ್ತು ಸಂಪೂರ್ಣವಾಗಿ ಅವರ ಲಿಂಗದ ಆಧಾರದ ಮೇಲೆ ಮಾಡಲಾಗಿದೆ ಎಂದು ವಾದಿಸಿ ಸಾರ್ವಜನಿ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದಕ್ಕೆ ನ್ಯಾಯಾಲಯವು ಪ್ರತಿಕ್ರಿಯಿಸುತ್ತಿತ್ತು.

NDA ಪರೀಕ್ಷೆಗಳ ಮೂಲಕ ನೇಮಕಗೊಂಡ ಪುರುಷರು ಪ್ರಸ್ತುತ ಭಾರತೀಯ ಮಿಲಿಟರಿಯಲ್ಲಿ ಶಾಶ್ವತ ಕಾರ್ಯಾಚರಣೆಯಲ್ಲಿದ್ದಾರೆ. ಆದಾಗ್ಯೂ, ಮಹಿಳಾ ಅಭ್ಯರ್ಥಿಗಳನ್ನು ಈಗ ಅಲ್ಪಾವಧಿಯ ಸೇವಾ ಸಮಿತಿಯ ಅಧಿಕಾರಿಗಳಾಗಿ ನೇಮಿಸಿಕೊಳ್ಳಲಾಗುತ್ತದೆ, ನಂತರ ಅವರ ವೃತ್ತಿಜೀವನದಲ್ಲಿ ಶಾಶ್ವತ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ಎಎಪಿಯಿಂದ ಮಾಜಿ ಸೈನಿಕ ಅಜಯ್ ಕೊತಿಯಾಲ್ ಸಿಎಂ ಅಭ್ಯರ್ಥಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights