ಕೊನೆ ಕ್ಷಣದಲ್ಲಿ ಬದಲಾಯಿತು ಸಿಡಿ ಯುವತಿ ಹೇಳಿಕೆ ನೀಡುವ ಸ್ಥಳ…!

ಕೊನೆ ಕ್ಷಣದಲ್ಲಿ ಸಿಡಿ ಯುವತಿ ಹೇಳಿಕೆ ನೀಡುವ ಸ್ಥಳ ಬದಲಾವಣೆಯಾಗಿದೆ. ಯುವತಿ ಪರ ವಕೀಲ ಜಗದೀಶ್ ಹೇಳಿದಂತೆ ಸಿಡಿ ಲೇಡಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿಲ್ಲ. ಬದಲಿಗೆ ವಸಂತ್ ನಗರದ ಗುರುನಾನಕ ಭವನದಲ್ಲಿ ಆಕೆಯ ಹೇಳಿಕೆ ಪಡೆಯಲಾಗುತ್ತಿದೆ.

ಯುವತಿ ಈಗಾಗಲೇ ಗುರುನಾನಕ ಭವನದಲ್ಲಿದ್ದು ಜಡ್ಜ್, ಲೇಡಿ ಟೈಪಿಸ್ಟ್ ಮಾತ್ರ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ವಿಚಾರಣೆ ನಡೆಯುವ ವೇಳೆ ಯಾರೂ ಕೂಡ ಪ್ರವೇಶಿಸಲು ಅವಕಾಶವಿಲ್ಲ. ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ  ಸಿಆರ್ಪಿಎಸ್ 164 ಅಡಿಯಲ್ಲಿ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತಿದ್ದಾಳೆ.

ಈಗಾಗಲೇ ಯುವತಿ ಹೇಳಿಕೆ ಆರಂಭವಾಗಿದ್ದು, ಟೈಪಿಸ್ಟ್ ಟೈಪ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಯುವತಿ ಕೊಡುವ ಹೇಳಿಕೆ ಮಧ್ಯೆ ನ್ಯಾಯಾಧೀಶರು ಯಾವ ಪ್ರಶ್ನೆನೂ ಕೇಳುವ ಹಾಗಿಲ್ಲ. ಆಕೆ ಹೇಳುವ ಪ್ರತಿಯೊಂದು ಹೇಳಿಕೆಯನ್ನು ಟೈಪ್ ಮಾಡಿಕೊಳ್ಳಲಾಗುತ್ತದೆ. ನ್ಯಾಯದೇವತೆ ಪ್ರಮಾಣ ಮಾಡಿದ ಯುವತಿ ಹೇಳಿಕೆ ಕೊಡುತ್ತಿದ್ದಾಳೆ.

ಆದರೆ ಆಕೆ ಇದುವರೆಗೂ ಯಾರ ರಕ್ಷಣೆಯಲ್ಲಿದ್ದಳು..? ಯಾರ ಜೊತೆ ಇದ್ದಳು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು ಆಕೆಯನ್ನು ವಿಚಾರಣೆಗೆ ಒಳಪಡಿಸುವ ಸಣ್ಣ ಭಾಗ ಅಷ್ಟೇ. ಇನ್ನೂ ಹಲವಾರು ಹಂತದಲ್ಲಿ ಆಕೆ ವಿಚಾರಣೆ ನಡೆಸಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights