ರಮೇಶ್ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ – ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ” ನನಗೆ ಇರುವಂತ ಮಾಹಿತಿ ಪ್ರಕಾರ, ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದಲ್ಲಿ 5 ಕೋಟಿ ಡೀಲ್ ಆಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.” ಕಳೆದ ಮೂರು ತಿಂಗಳಿಗೂ ಮುನ್ನ ಈ ಡೀಲ್ ಮಾಡಿದ್ದಾರೆ. ದೊಡ್ಡ ದೊಡ್ಡವರೇ ಈ ಸಿಡಿ ಪ್ರಕರಣದಲ್ಲಿ ಇದ್ದಾರೆ. ತನಿಖೆ ಮಾಡುವ ಜವಬ್ದಾರಿ ಸರ್ಕಾರ ಕೈಯಲ್ಲಿದೆ. ಇಂತಹ ಪ್ರಕರಣವನ್ನು ನೋಡಿ ನಾನು ಖುಷಿ ಪಡುವಂತವನಲ್ಲ. ಇದರಲ್ಲಿ ನಂದು ಒಂದು ಕಲ್ಲು ಇರಲಿ ಎಂದು ಕಲ್ಲು ಹೊಡೆಯುವವನಲ್ಲ ” ಎಂದು ಹೇಳೀದ್ದಾರೆ.

” ನಮ್ಮ ಸರ್ಕಾರ ಬೀಳಿಸಿದರು ಎಂದು ನಾನು ಈ ರೀತಿ ಮಾಡುವಂತವನಲ್ಲ. ಬ್ಲಾಕ್ ಮನಿ, ಬ್ಲಾಕ್ ಮೇಲ್ ಮಾಡುವಂತ ಜನರನ್ನು ಬಂಧಿಸಿ. ಅವರಿಂದ ಸಿಡಿ ವಶಪಡಿಸಿಕೊಂಡು. ರಾಜ್ಯ ಸರ್ಕಾರವೇ ಆ ಸಿಡಿಯನ್ನು ಬಿಡುಗಡೆ ಮಾಡಬೇಕು. ರಾಜಕಾರಣಿಗಳ ಸಿಡಿ ಇದೆ ಎಂದು ಹೇಳುವ ವ್ಯಕ್ತಿಗಳನ್ನ ಏರೋಪ್ಲೇನ್ ಹತ್ತಿಸಿ. ಬ್ಲಾಕ್ ಮೇಲ್ ಮಾಡುವಂತವರನ್ನು ಒದ್ದು ಒಳಗೆ ಹಾಕಿ. ಯಾರು ಬ್ಲಾಕ್ ಮೇಲ್ ಮಾಡ್ತಾರೋ ಅವರಿಗೆ ಪುಷ್ಠಿ ನೀಡಬಾರದು” ಎಂದು ಕಿಡಿ ಕಾರಿದ್ದಾರೆ.

ಅಷ್ಟೇ ಅಲ್ಲ ಮಾಜಿ ಸಿಎಂಗಳ 2-3 ಸಿಡಿ ಇದೆ ಎಂದು ಹೇಳುತ್ತಾರೆ. ಹಾಗೇ ಬ್ಲಾಕ್ ಮೇಲ್ ಮಾಡುವವರನ್ನು ಒದ್ದು ಒಳಗೆ ಹಾಕಿ. ಮಾಜಿ ಸಿಎಂ ಅಂದರೆ ಯಾರು ಎಸ್ ಎಂ ಕೃಷ್ಣ, ದೇವೇಗೌಡ ಇದ್ದಾರೆ. ಯಾರು ಅಂತ ಅವರಿಂದ ಬಾಯಿ ಬಿಡಿಸಿ ಎಂದು ಕಿಡಿ ಕಾರಿದ್ರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights